Category: ಕನ್ನಡ

Techಮಾತು -1 | ನಿಮ್ಮ ಮೊಬೈಲ್‌ ಸುರಕ್ಷಿತವಾಗಿರಿಸಿಕೊಳ್ಳಲು ಇಲ್ಲಿವೆ 8 ಮಾರ್ಗಗಳು

ಮೊಬೈಲ್‌ನ ಎಲ್ಲ ರೀತಿಯ ಸಂವಹನದ ಸಾಧನವಾಗಿದೆ. ಜೊತೆಗೆ ಬ್ಯಾಂಕಿಂಗ್‌, ಶಾಪಿಂಗ್‌ ಸೇರಿದಂತೆ ವಿವಿಧ ವ್ಯವಹಾರಗಳಿಗೂ ಬಳಕೆಯಾಗುತ್ತಿದೆ. ಹಾಗಾಗಿ ಹ್ಯಾಕಿಂಗ್‌, ಫಿಶಿಂಗ್‌ಗೆ ದಾಳಿಗೆ ತುತ್ತಾಗುವ ಸಾಧ್ಯತೆಯೂ ಹೆಚ್ಚು. ಈ ಹಿನ್ನೆಲೆಯಲ್ಲಿ ಮೊಬೈಲ್‌ನಲ್ಲಿರುವ ಮಾಹಿತಿಯನ್ನು ಸುರಕ್ಷಿತವಾಗಿರಿಸಿಕೊಳ್ಳುವುದು ಮೊದಲ ಆದ್ಯತೆ. ಅದಕ್ಕಾಗಿ ಎಂಟು ಮಾರ್ಗಗಳನ್ನು ತೇಜೇಶ್‌ ಇಲ್ಲಿ ಸೂಚಿಸಿದ್ದಾರೆ. ಈ ಪಾಡ್ಕ್ಯಾಸ್ಟ್ ಮೊದಲು ಟೆಕ್-ಕನ್ನಡದಲ್ಲಿ ಕಾಣಿಸಿಕೊಂಡಿತು. ನಂತರ ಅದನ್ನು ಇಲ್ಲಿ ಪೋಸ್ಟ್ ಮಾಡಲಾಯಿತು.

ಭಾರತೀಯತೆ, ಹಕ್ಕು ಅದು, ಭಿಕ್ಷೆಯಲ್ಲ

ಭಾರತೀಯತೆ ನಿಮ್ಮಪ್ಪನ ಮನೆ ಆಸ್ತಿಯಲ್ಲ ಕಾಗದ ಪತ್ರ ನೋಡಿ ಕೋಡೋಕೆ ಹಕ್ಕು ಅದು, ಭಿಕ್ಷೆಯಲ್ಲ ಕಾಗದ ಪತ್ರ ತೋರಿಸಿ ಪಡೆಯೋಕೆ ನಾವು ಭಾರತೀಯರು ಕಾಗದದಿಂದಲ್ಲ, ಹೃದಯದಿಂದ, ರಕ್ತದಿಂದ ಗುಂಡಿಗೆ ಎದೆಗೆ ಕೊಟ್ಟೇವು ತಲೆಯ ನಾವು ಬಾಗೊಲ್ಲ ಭಾರತೀಯತೆ, ಹಕ್ಕು ಅದು, ಭಿಕ್ಷೆಯಲ್ಲ ಅದೇನೆ ಆಗಲಿ ಹೋಗೋಲೆ ಕಾಗದ ಪತ್ರ ನಾವು ತೋರ್ಸಲ್ಲ Anti CAA/NRC/NPR ಚಳುವಳಿಯ ಸಂದರ್ಭದಲ್ಲಿ ಬರೆದದ್ದು. ಲಕ್ಷಾಂತರ ಚಳುವಳಿಗಾರರ ಹಾಗು ವರುಣ್ ಗ್ರೋವರ್ ಪ್ರಭಾವ ‌ಇದರ ಮೇಲಿದೆ. ತೇಜೇಶ್. ಜಿ ಎನ್...

Street Name Signs in India is usually dual language. The English part is a transliterated version.

Project – Nammooral techu

Nammooral techu (ನಮ್ಮೂರಲ್ ಟೆಕ್ಕು) is the new project I am involved with. Idea is to translate technology jargons to Kannada, build vocabulary etc. In a way start discussions around it in Kannada. From the about page ಇದು ಟೆಕ್ (ಐಸಿಟಿ, ಡೇಟ ಇತ್ಯಾದಿ)ಗೆ ಸಂಬಂಧಿಸಿದ ಕನ್ನಡ ಪದಗಳನ್ನು ಶಬ್ದಕೋಶಕ್ಕೆ ಸೇರಿಸುವ ನಮ್ಮ ಪ್ರಯತ್ನ. ಸದ್ಯಕ್ಕೆ, ಟೆಕ್ ಪದದ ಕನ್ನಡ ಅನುವಾದದೊಂದಿಗೆ...

ಕಟ್ಟುವೆವು ನಾವು

ಹೊಸನೆತ್ತರುಕ್ಕುಕ್ಕಿ ಆರಿಹೋಗುವ ಮುನ್ನ, ಹರೆಯದೀ ಮಾಂತ್ರಿಕನ ಮಾಟ ಮುಸುಳುವ ಮುನ್ನ, ಉತ್ಸಾಹಸಾಹಸದ ಉತ್ತುಂಗ ವೀಚಿಗಳ ಈ ಕ್ಷುಬ್ಧ ಸಾಗರವು ಬತ್ತಿ ಹೋಗುವ ಮುನ್ನ ಕಟ್ಟುವೆವು ನಾವು ಹೊಸ ನಾಡೊಂದನು! ನಮ್ಮೆದೆಯ ಕನಸುಗಳೇ ಕಾಮಧೇನು ಆದಾವು, ಕರೆದಾವು ವಾ೦ಛಿತವನು; ಕರೆವ ಕೈಗಿಹುದೋ ಕನಸುಗಳ ಹರಕೆ; ಗುರಿ ತಪ್ಪದೊಮ್ಮುಖದ ಬಯಕೆ ಬೆಂಬಲಕೆ! ಜಾತಿ ಮತ ಭೇದಗಳ ಕಂದಕವು ಸುತ್ತಲೂ, ದುರ್ಭೇದ್ಯವೆನೆ ಕೋಟೆಕೊತ್ತಲಗಳು; ರೂಢಿರಾಕ್ಷಸನರಸುಗೈಯುವನು, ತೊಳ್ತಟ್ಟಿ ತೊಡೆತಟ್ಟಿ, ಕರೆಯುವನು ಸಂಗ್ರಾಮಕೆ! ನಾವು ಹಿಂದೆಗೆವೆವೇ? ವೀರ ತರುಣರು ನಾವು! ಒಂದೆ...

ಖಾಸಗಿತನ ಮೂಲಭೂತ ಹಕ್ಕು

ನೆನ್ನೆ ಮಾನ್ಯ ಸುಪ್ರೀಂ ಕೋರ್ಟ್‌ನ ಒಂಬತ್ತು ನ್ಯಾಯಮೂರ್ತಿಗಳ ಸಂವಿಧಾನ ಪೀಠವು ಖಾಸಗಿತನ ಮೂಲಭೂತ ಹಕ್ಕು ಎಂದು ಸರ್ವಾನುಮತದಿಂದ ತೀರ್ಮಾನಿಸಿತು. ಸರಳವಾಗಿ ಹೇಳಬೇಕೆಂದರೆ ಖಾಸಗಿತನ ತನ್ನ ಪಾಡಿಗೆ ತಾನು ಬದುಕುವ ಹಕ್ಕು. ಇದನ್ನು ಎತ್ತಿಡಿಯುವುದರ ಮೂಲಕ ಪ್ರತಿ ಭಾರತೀಯನ ಮೇಲೆ ಪರಿಣಾಮ ಬೀರುವಂತಹ ಚಾರಿತ್ರಿಕ ತೀರ್ಪುನ್ನು ಪೀಠವು ನೀಡಿದೆ. ನೆನಪಿನಲ್ಲಿಡಬೇಕಾದ ಅಂಶವೆಂದರೆ ಖಾಸಗಿತನವು ಮೂಲಭೂತ ಹಕ್ಕು ಅಲ್ಲ ಎಂದು ಕೇಂದ್ರ ಸರ್ಕಾರ ಪ್ರತಿಪಾದಿಸಿತ್ತು. ಇವೆಲ್ಲದರ ಬಗ್ಗೆ ನನ್ನೆರಡು ಮಾತುಗಳು. ಓದಲಿಕ್ಕೆ: ಸುಪ್ರೀಂ ಕೋರ್ಟ್‌ನ ತೀರ್ಪಿನ ಪ್ರತಿ...

ನನಗಿಬ್ಬರೂ ಒಂದೇ

ನನಗೆ ಸುಮಾರು ೧೦ ವರ್ಷವಾದಾಗ ಅಮ್ಮ ನನ್ನನ್ನು ಮನೆ ಕೆಲಸಕ್ಕೆ ಹಚ್ಚಿದಳು. ಬೇರೆಯವರ ಮನೆ ಅಲ್ಲ ನಮ್ಮನೆ ಕೆಲಸ. ಅಲ್ಲಿಯವರೆಗು ಅಮ್ಮ ತನ್ನ ಕೆಲಸದ ಜೊತೆ ಮನೆ ಕೆಲಸ ಮಾಡುತ್ತಿದ್ದರು. ಅಪ್ಪ ಕೆಲಸದ ಜೊತೆ ಮನೆಗೆ ಸಂಬಂಧಿಸಿದ ಹೊರಗಿನ ಕೆಲಸ ಮಾಡುತಿದ್ದರು. ನಮಗೆ ೧೦ ವರ್ಷವಾದ ತಕ್ಷಣ ಅವರ ಕೆಲಸಗಳನ್ನು ನಮ್ಮೊಡನೆ ಹಂಚಿಕೊಳ್ಳಲು ಪ್ರಾರಂಭಿಸಿದರು. ಸ್ವಲ್ಪ ವ್ಯತ್ಯಾಸ ಅಂದರೆ ಅಮ್ಮ ನಮಗೆ ಹೊರಗಿನ ಕೆಲಸ, ಮನೆಯೊಳಗಿನ ಕೆಲಸ ಅಂತ ಭೇದ ಭಾವ ಮಾಡಲಿಲ್ಲ. ಪಾತ್ರೆ...